ಹೈಲೈಟ್ಸ್:
- ನಮ್ಮ ಮೆಟ್ರೋದ 3ನೇ ಹಂತದ ವಿಸ್ತರಣೆಗಾಗಿ ಸಾವಿರ ಕೋಟಿ ರೂ ನಿರೀಕ್ಷೆಯಲ್ಲಿ ಬಿಎಂಆರ್ಸಿಎಲ್
- ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ/ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾರ್ಗ ನಿರ್ಮಾಣ
- ಕಾಮಗಾರಿ ಆರಂಭಕ್ಕೆ ಸಿಗಬೇಕಿದೆ ಕೇಂದ್ರದ ಅನುಮೋದನೆ, ಮಾರ್ಚ್ ಒಳಗಾಗಿ ಸಿಗುವ ಸಾಧ್ಯತೆ
![Namma Metro](https://kannada.economictimes.com/thumb/msid-107740624,imgsize-109128,width-380,height-214,resizemode-75/namma-metro-107740624.jpg)
ನಮ್ಮ ಮೆಟ್ರೋ
ರಾಜ್ಯ ಒಪ್ಪಿಗೆ ನೀಡಿರಲಿಲ್ಲ
ಎರಡೂ ಮಾರ್ಗಗಳನ್ನು ಒಳಗೊಂಡಿರುವ 44 ಕಿ.ಮೀ. ಯೋಜನೆ ಇದಾಗಿದ್ದು, 2022ರ ನವೆಂಬರ್ನಲ್ಲಿ ಹಂತ-3ರ ವಿವರವಾದ ಯೋಜನಾ ವರದಿಗೆ (ಡಿಪಿಆರ್) ಹಸಿರು ನಿಶಾನೆ ತೋರಿದ್ದರೂ, ರಾಜ್ಯ ಸರಕಾರ ಪೂರ್ವ-ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ತನ್ನ ಒಪ್ಪಿಗೆ ನೀಡಿರಲಿಲ್ಲ.ಯೋಜನೆಗೆ ಕೇಂದ್ರದ ಅನುಮೋದನೆ ಅಗತ್ಯವಿರುವುದರಿಂದ ಅದಕ್ಕೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯೋಜನೆಯು ಎಲ್ಲ ಶಾಸನಬದ್ಧ ಅಡೆತಡೆಗಳನ್ನು ತೆರವುಗೊಳಿಸುವವರೆಗೆ ಪ್ರಾಥಮಿಕ ಕೆಲಸ ಪ್ರಾರಂಭಿಸಲು ನಿರ್ದಿಷ್ಟ ಅನುಮೋದನೆ ಕೋರಿ ಬಿಎಂಆರ್ಸಿಎಲ್ ಮತ್ತೊಮ್ಮೆ ಕೇಂದ್ರಕ್ಕೆ ಪತ್ರ ಬರೆದಿದೆ. ಮಾರ್ಚ್ ವೇಳೆಗೆ ಕೇಂದ್ರವು ಡಿಪಿಆರ್ ಅನುಮೋದಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್ಸಿಎಲ್ ಮೂಲಗಳು ತಿಳಿಸಿವೆ.
ಈ ನಡುವೆ, ಹಣಕಾಸು ಇಲಾಖೆಯು ಕೇಂದ್ರದ ಒಪ್ಪಿಗೆಗೆ ಮುಂಚಿತವಾಗಿ ನಿರ್ಮಾಣ ಪೂರ್ವ ಚಟುವಟಿಕೆಗಳಿಗೆ ಅನುಮೋದನೆ ನೀಡಿದ ಪೂರ್ವನಿದರ್ಶನಗಳಿವೆಯೇ ಎಂದು ಪತ್ರ ಬರೆದಿದೆ. ಪ್ರತಿಕ್ರಿಯೆಯಾಗಿ, ನಮ್ಮ ಮೆಟ್ರೋ ಹಂತ 2 ಎ (ಸಿಲ್್ಕ ಬೋರ್ಡ್-ಕೆಆರ್ಪುರ) ಮತ್ತು ಹಂತ 2ಬಿ (ಕೆಆರ್ಪುರ-ವಿಮಾನ ನಿಲ್ದಾಣ) ಉದಾಹರಣೆಗಳನ್ನು ಉಲ್ಲೇಖಿಸಿದೆ. ಅಂತಹ ಅನುಮೋದನೆಗಳನ್ನು ಹಿಂದೆ ನೀಡಲಾಗಿತ್ತು.
1003.47 ಕೋಟಿ ರೂಪಾಯಿಗೆ ಮನವಿ
ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸಲು ಕೇಂದ್ರ ಸರಕಾರ ಸಾಮಾನ್ಯವಾಗಿ 12-18 ತಿಂಗಳು ತೆಗೆದುಕೊಳ್ಳುತ್ತದೆ. ಆದ್ದರಿಂದ ಇದು ಅಸಾಧ್ಯವೇನಲ್ಲ. ಕಾಮಗಾರಿಗೆ ಸಿದ್ಧತೆ ಕೈಗೊಳ್ಳಲು, ಮುಂಬರುವ ಬಜೆಟ್ನಲ್ಲಿ 1,003.47 ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ರಾಜ್ಯ ಸರಕಾರಕ್ಕೆ ಬಿಎಂಆರ್ಸಿಎಲ್ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಭೂಸ್ವಾಧೀನದ ಕುರಿತು ಮಾತನಾಡಿದ ಬಿಎಂಆರ್ಸಿಎಲ್ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂ.ಎಸ್.ಚನ್ನಪ್ಪಗೌಡ, ''ಜೆಪಿ ನಗರ 4ನೇ ಹಂತ ಮತ್ತು ಮೈಸೂರು ರಸ್ತೆ ನಡುವೆ ನಿಲ್ದಾಣಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲು ಅಗತ್ಯವಿರುವ ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು ಮಾಲೀಕರಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ,'' ಎಂದು ತಿಳಿಸಿದ್ದಾರೆ.